ಸಂಜೆಯ ಸ್ವಗತ

ಬರಿದೆ ಕಳೆದುದು ಕಾಲ
ಬರೆಯಲಾರದೆ ಮನವ
ತಿರುಗಿ ಬಾರದ ದಿನಗಳ
ಭಿತ್ತಿ ಚಿತ್ತಾರದಲಿ
ಕನಸುಗಣ್ಣಿನ ಕಾವ್ಯ
ಕಳೆದುಕೊಂಡಿದೆ ದನಿಗಳ

ಯಾರದೋ ಹೋಮ
ವೈವಾಹಿಕದ ಧೂಮದಲಿ
ಸೂರೆ ಹೋದುದು ರಾಗವು
ವರ್ಣರಂಜಿತ ಕದಪು
ಯಾರಿಗೋ ನೈವೇದ್ಯ
ಇಂಗಿ ಹೋದುವೆ ಕಂಬನಿ

ಎಲ್ಲೋ ಮರೆಯಲಿ ಚೈತ್ರ
ವೈಶಾಖ ಧೀಂಗಿಣವು
ಬೇಡವೈ ಮಾನಿಷಾದ
ಬೇಟೆಗುಳಿದಿಹುದೇನು
ಮನದ ಬೆಂಗಾಡಿನಲಿ
ಸ್ಥಾಯಿಯಾದುದು ವಿಷಾದ

ಮೋಡ ನಿಲ್ಲುವುದಿಲ್ಲ
ಹನಿಯ ಚೆಲ್ಲುವುದಿಲ್ಲ
ಟಿಸಿಲೊಡೆಯದೆಂದೆಂದು ಕವನ
ಹೂವೆ ಅರಳದು ಇಲ್ಲಿ
ಮಕರಂದವೆಲ್ಲಿಂದ
ಹಾರೀತು ಎಲ್ಲಿ ಭ್ರಮರ?

೨೦೦೩
*****

 

 

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಾವ ಕೊಂದ ಮಗು
Next post ಕೋಟೆ

ಸಣ್ಣ ಕತೆ

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ಗ್ರಹಕಥಾ

    [ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ… Read more…

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

cheap jordans|wholesale air max|wholesale jordans|wholesale jewelry|wholesale jerseys